
ಹೊಸನಗರ: ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆಯ ಸಮಯದಲ್ಲಿ ಹೊಸನಗರದಿಂದ ಬಾಣಿಗಕ್ಕೆ ಬೈಕಿನಲ್ಲಿ ಗಿರಿಜಾಂಬ ಬಸ್ ಮಾಲೀಕ( ಎಸ್.ಡಿ.ಪಿ) ಕೆ.ವಿ. ರವಿ ಹಾಗೂ ಅವರ ಪತ್ನಿ ಅಂಗನವಾಡಿ ಕಾರ್ಯಕರ್ತೆ ಗೀತಾ ರವಿಯವರು ಪ್ರಯಾಣಿಸುತ್ತಿದ್ದಾಗ ಬ್ರಹ್ಮೇಶ್ವರ ಬಳಿ ಕಲ್ಲುಕೋರೆ ಕಡೆಯಿಂದ ಬಂದ ಅಪರಿಚಿತ ಬೈಕ್ ಗುದ್ದಿ ಗಂಭೀರ ಗಾಯವಾದ ಘಟನೆ ನಡೆದಿದೆ.
ಗಂಭೀರ ಗಾಯವಾದ ಬಸ್ಸ್ ಮಾಲೀಕ ಊರಿನವರ ಸಹಕಾರದಿಂದ ಹೊಸನಗರದ ಸರ್ಕಾರಿ ಸಾರ್ವಜನಿಕ ಆಸ್ವತ್ರೆಗೆ ದಾಖಲಿಸಲಾಗಿದ್ದು ತಲೆ ಕೈ ಕಾಲು ಹಾಗೂ ಹೊಟ್ಟೆಯ ಕಿಬ್ಬೆಲುಬಿಗೆ ಗಾಯವಾಗಿದೆ.

ಬೈಕ್ ಸಾವರ ಪರಾರಿ : ಬ್ರಹ್ಮೇಶ್ವರ ಕಲ್ಲುಕೋರೆಯ ಬಳಿ ಬೈಕ್ ಡಿಕ್ಕಿಯಾಗಿ ರವಿ ಹಾಗೂ ದಂಪತಿ ಗೀತಾರವರು ಕೆಳಗೆ ಬಿದ್ದಿದ್ದರೂ ಅವರನ್ನು ಎತ್ತುವ ಕೆಲಸಕ್ಕೆ ಮುಂದಾಗದೇ ಬೈಕ್ ಸಾವರ ಬೈಕ್ ಸಹಿತ ಪರಾರಿಯಾಗಿದ್ದಾರೆ.
ಹೊಸನಗರದ ಪೋಲೀಸ್ ಠಾಣೆಯಲ್ಲಿ ಹಿಟ್ ಎಂಡ್ ರನ್ ಕೇಸು ದಾಖಲಿಸಿದ್ದು ಬೈಕ್ ಹಾಗೂ ಬೈಕ್ ಸಾವರರ ಪತ್ತೆಗಾಗಿ ಪೋಲೀಸ್ ಇಲಾಖೆ ಕ್ರಮ ಕೈಗೊಂಡಿದೆ.

















Leave a Reply