ಸುಬ್ಬಯ್ಯ ಉಚಿತ ಆಸ್ಪತ್ರೆ ಲೋಕಾರ್ಪಣೆ| ಸುಬ್ಬಯ್ಯ ಆಸ್ಪತ್ರೆಯ ಸಮಾಜಸೇವೆ ಶ್ಲಾಘನೀಯ : ಹೊಂಬುಜ ಶ್ರೀಗಳು

Screenshot 20260529 202001 Canva ಸುಬ್ಬಯ್ಯ ಉಚಿತ ಆಸ್ಪತ್ರೆ ಲೋಕಾರ್ಪಣೆ| ಸುಬ್ಬಯ್ಯ ಆಸ್ಪತ್ರೆಯ ಸಮಾಜಸೇವೆ ಶ್ಲಾಘನೀಯ : ಹೊಂಬುಜ ಶ್ರೀಗಳು
Spread the love
img 20260110 wa00006829319900637305492 ಸುಬ್ಬಯ್ಯ ಉಚಿತ ಆಸ್ಪತ್ರೆ ಲೋಕಾರ್ಪಣೆ| ಸುಬ್ಬಯ್ಯ ಆಸ್ಪತ್ರೆಯ ಸಮಾಜಸೇವೆ ಶ್ಲಾಘನೀಯ : ಹೊಂಬುಜ ಶ್ರೀಗಳು

ರಿಪ್ಪನ್‌ಪೇಟೆ : ಯಾವುದೇ ಸರ್ಕಾರಗಳೂ ಮಾಡದ ಜನಸೇವೆಯ ಕೆಲಸವನ್ನು ಸುಬ್ಬಯ್ಯ ಸಮೂಹ ಸಂಸ್ಥೆಯವರು ಮಾಡುತ್ತಿದ್ದಾರೆ ಎಂದು ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್  ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿಗೆ ಸಮೀಪದ ಹುಂಚದ ಬಿಲ್ಲೇಶ್ವರ ಗ್ರಾಮದಲ್ಲಿ ಸುಬ್ಬಯ್ಯ ಸಮೂಹ ಸಂಸ್ಥೆಗಳು ಹಾಗೂ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಸಂಸ್ಥಾಪಕರಾದ ದಿವಂಗತ ಟಿ. ಸುಬ್ಬರಾಮಯ್ಯ ಅವರ ಸ್ಮರಣಾರ್ಥವಾಗಿ ಸಾರ್ವಜನಿಕರಿಗಾಗಿ ನಿರ್ಮಿಸಲಾದ ಉಚಿತ ಸುಸಜ್ಜಿತ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

img 20260324 wa00566257560419651606338 ಸುಬ್ಬಯ್ಯ ಉಚಿತ ಆಸ್ಪತ್ರೆ ಲೋಕಾರ್ಪಣೆ| ಸುಬ್ಬಯ್ಯ ಆಸ್ಪತ್ರೆಯ ಸಮಾಜಸೇವೆ ಶ್ಲಾಘನೀಯ : ಹೊಂಬುಜ ಶ್ರೀಗಳು

ಸುಬ್ಬಯ್ಯ ಆಸ್ಪತ್ರೆ, ಮೆಡಿಕಲ್ ಕಾಲೇಜ್ ಹಾಗೂ ಮ್ಯಾಕ್ಸ್ ಆಸ್ಪತ್ರೆಗಳ ಮೂಲಕ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿದೆ. ಇಂತಹ ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಹೇಳಿದರು.

ಹುಂಚದ ಹೊಂಬುಜ ಜೈನಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯರು ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು. ಮಠದಲ್ಲಿರುವ ಆಂಬುಲೆನ್ಸ್ ಸೇವೆಯನ್ನು ಆಸ್ಪತ್ರೆಗೆ ಉಚಿತವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸುಬ್ಬಯ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ನಾಗೇಂದ್ರ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕಲಗೋಡು ರತ್ನಾಕರ್, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಮಾಜಿ ಮಹಾನಗರ ಪಾಲಿಕೆ ಸದಸ್ಯ ಐಡಿಯಲ್ ಗೋಪಿ ಹಾಗೂ ಹಲವರು ಉಪಸ್ಥಿತರಿದ್ದರು.

img 20260515 wa00067551874235528111083 ಸುಬ್ಬಯ್ಯ ಉಚಿತ ಆಸ್ಪತ್ರೆ ಲೋಕಾರ್ಪಣೆ| ಸುಬ್ಬಯ್ಯ ಆಸ್ಪತ್ರೆಯ ಸಮಾಜಸೇವೆ ಶ್ಲಾಘನೀಯ : ಹೊಂಬುಜ ಶ್ರೀಗಳು

Leave a Reply

Your email address will not be published. Required fields are marked *