ಹೊಸನಗರ: ಹೊಸನಗರದ ರಾಮಕೃಷ್ಣ ವಿದ್ಯಾಲಯದ ಎಂ.ಡಿ ನಾಗರಾಜ್ ಹಾಗೂ ಶೈಲಾರವರ ಸುಪುತ್ರಿಯಾದ ಎಂ.ಎನ್. ತೃಪ್ತಿ ಅವರು ಈ ಬಾರಿಯ ಎಸ್ಎಸ್ಎಲ್ಸಿಯಲ್ಲಿ 625ಕ್ಕೆ 613 ಅಂಕ ಪಡೆದಿದ್ದು, ಇವರ ಜೊತೆಗೆ ಇದೇ ಶಾಲೆಯ ಕೇಶವಮೂರ್ತಿ ಚಂದ್ರಕಲಾರವರ ಸುಪುತ್ರ ಹೆಚ್.ಕೆ ಅಕುಲ್ ಅವರು 625ಕ್ಕೆ 609 ಅಂಕ ಪಡೆದಿದ್ದು, ಇವರಿಬ್ಬರನ್ನೂ ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸನ್ಮಾನ ಕಾರ್ಯಕ್ರಮದಲ್ಲಿ ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ದೈಹಿಕ ಪರಿವೀಕ್ಷಕ ನಿರ್ದೇಶಕರಾದ ವಿನಯ್ ಹೆಗಡೆ, ರಾಮಕೃಷ್ಣ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಿ.ಎಂ ದೇವರಾಜ್, ಮುಖ್ಯ ಶಿಕ್ಷಕರಾದ ರಾಜೇಶ್, ನಗರ ರಾಘವೇಂದ್ರ, ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

















Leave a Reply