ಹೆದ್ದಾರಿಪುರ: ಕಬ್ಬಿನ ಗದ್ದೆ ಬೆಂಕಿ ಅವಘಡ – ರೈತನಿಗೆ ಶಾಸಕ ಆರಗ ಜ್ಞಾನೇಂದ್ರ ಸಾಂತ್ವಾನ

Blue and Red Voter Education Banner 20260331 162937 0000 scaled ಹೆದ್ದಾರಿಪುರ: ಕಬ್ಬಿನ ಗದ್ದೆ ಬೆಂಕಿ ಅವಘಡ - ರೈತನಿಗೆ ಶಾಸಕ ಆರಗ ಜ್ಞಾನೇಂದ್ರ ಸಾಂತ್ವಾನ
Spread the love

ರಿಪ್ಪನ್ ಪೇಟೆ:ಮೀಪದ ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೂರು ಗ್ರಾಮದಲ್ಲಿನ ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾದ ಘಟನೆಗೆ ಸಂಬಂಧಿಸಿ ಶಾಸಕ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮದ ಸರ್ವೆ ನಂ. 60ರಲ್ಲಿ ಕೃಷಿ ಮಾಡುತ್ತಿದ್ದ ಬಡ ರೈತರಾದ ಷಣ್ಮುಖಪ್ಪ ಬಿನ್ ಕೃಷ್ಣಪೂಜಾರಿ ಅವರಿಗೆ ಸೇರಿದ ಜಾಗದಲ್ಲಿ ಈ ಅವಘಡ ಸಂಭವಿಸಿದ್ದು, ಸುಮಾರು 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬಿನ ಪೈಕಿ 1.5 ಎಕರೆ ಭೂಮಿಯಲ್ಲಿದ್ದ 20 ಟನ್ ಕಬ್ಬು  ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಇದರಿಂದ ರೈತನಿಗೆ ಅಂದಾಜು 4 ರಿಂದ 5 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ರೈತ ತನ್ನ ಅಳಲನ್ನು ತೋಡಿಕೊಂಡಿದ್ದ.

img 20260331 wa00436199844529049850957 ಹೆದ್ದಾರಿಪುರ: ಕಬ್ಬಿನ ಗದ್ದೆ ಬೆಂಕಿ ಅವಘಡ - ರೈತನಿಗೆ ಶಾಸಕ ಆರಗ ಜ್ಞಾನೇಂದ್ರ ಸಾಂತ್ವಾನ

ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ ಅವರು ಬೆಂಕಿ ಅವಘಡದಿಂದ ಹಾನಿಗೊಳಗಾದ  ಗದ್ದೆಯನ್ನು ವೀಕ್ಷಿಸಿ ಹಾನಿಯ ಪ್ರಮಾಣವನ್ನು ಪರಿಶೀಲಿಸಿದರು. ಬಳಿಕ ರೈತ ಷಣ್ಮುಖಪ್ಪ ಅವರೊಂದಿಗೆ ಮಾತನಾಡಿ ಅವರ ಕಷ್ಟ-ನಷ್ಟಗಳನ್ನು ವಿಚಾರಿಸಿ ಸಾಂತ್ವಾನ ಹೇಳಿದರು.

ಈ ಸಂದರ್ಭದಲ್ಲಿ ಸರ್ಕಾರದಿಂದ ಸಾಧ್ಯವಿರುವ ಪರಿಹಾರವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಕಲ್ಲೂರು ಆದರ್ಶ, ಮೂಗುಡ್ತಿ ಅರುಣ್ ಕುಮಾರ್, ಗಂಗಾಧರ್, ಅನ್ವೇಶ್, ಸದಾನಂದ, ಧರ್ಮಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

img 20260110 wa00004700898352862270325 ಹೆದ್ದಾರಿಪುರ: ಕಬ್ಬಿನ ಗದ್ದೆ ಬೆಂಕಿ ಅವಘಡ - ರೈತನಿಗೆ ಶಾಸಕ ಆರಗ ಜ್ಞಾನೇಂದ್ರ ಸಾಂತ್ವಾನ
img 20260325 wa00233233592775778006771 ಹೆದ್ದಾರಿಪುರ: ಕಬ್ಬಿನ ಗದ್ದೆ ಬೆಂಕಿ ಅವಘಡ - ರೈತನಿಗೆ ಶಾಸಕ ಆರಗ ಜ್ಞಾನೇಂದ್ರ ಸಾಂತ್ವಾನ

Leave a Reply

Your email address will not be published. Required fields are marked *