ರಿಪ್ಪನ್‌ಪೇಟೆಯಲ್ಲಿ ಶಾಂತಿ ಸಮಿತಿ ಸಭೆ; ಅಕ್ರಮ ಗೋಸಾಗಾಣಿಕೆ ತಡೆಯಲು ಕ್ರಮ| ಶಾಂತಿ ಹಾಗೂ ಸೌಹಾರ್ದತೆ ಯಿಂದ  ಬಕ್ರೀದ್ ಆಚರಿಸಿ – ಸರ್ಕಲ್ ಇನ್ಸ್ಪೆಕ್ಟರ್ ಎಂ.ಎಸ್. ಗೌಡಪ್ಪ ಗೌಡರ್

Screenshot 20260526 204155 ChatGPT ರಿಪ್ಪನ್‌ಪೇಟೆಯಲ್ಲಿ ಶಾಂತಿ ಸಮಿತಿ ಸಭೆ; ಅಕ್ರಮ ಗೋಸಾಗಾಣಿಕೆ ತಡೆಯಲು ಕ್ರಮ| ಶಾಂತಿ ಹಾಗೂ ಸೌಹಾರ್ದತೆ ಯಿಂದ  ಬಕ್ರೀದ್ ಆಚರಿಸಿ - ಸರ್ಕಲ್ ಇನ್ಸ್ಪೆಕ್ಟರ್ ಎಂ.ಎಸ್. ಗೌಡಪ್ಪ ಗೌಡರ್
Spread the love
img 20260110 wa00005855430324829276198 ರಿಪ್ಪನ್‌ಪೇಟೆಯಲ್ಲಿ ಶಾಂತಿ ಸಮಿತಿ ಸಭೆ; ಅಕ್ರಮ ಗೋಸಾಗಾಣಿಕೆ ತಡೆಯಲು ಕ್ರಮ| ಶಾಂತಿ ಹಾಗೂ ಸೌಹಾರ್ದತೆ ಯಿಂದ  ಬಕ್ರೀದ್ ಆಚರಿಸಿ - ಸರ್ಕಲ್ ಇನ್ಸ್ಪೆಕ್ಟರ್ ಎಂ.ಎಸ್. ಗೌಡಪ್ಪ ಗೌಡರ್

ರಿಪ್ಪನ್‌ಪೇಟೆ: ತ್ಯಾಗ ಮತ್ತು ಮಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಹೊಸನಗರ ವೃತ್ತ ನಿರೀಕ್ಷಕ ಎಂ.ಎಸ್. ಗೌಡಪ್ಪ ಗೌಡರ್ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆ ಬಕ್ರೀದ್ ಹಬ್ಬದ ಅಂಗವಾಗಿ ಆಯೋಜಿಸಿದ್ದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

img 20260427 wa00137828532131235992260 ರಿಪ್ಪನ್‌ಪೇಟೆಯಲ್ಲಿ ಶಾಂತಿ ಸಮಿತಿ ಸಭೆ; ಅಕ್ರಮ ಗೋಸಾಗಾಣಿಕೆ ತಡೆಯಲು ಕ್ರಮ| ಶಾಂತಿ ಹಾಗೂ ಸೌಹಾರ್ದತೆ ಯಿಂದ  ಬಕ್ರೀದ್ ಆಚರಿಸಿ - ಸರ್ಕಲ್ ಇನ್ಸ್ಪೆಕ್ಟರ್ ಎಂ.ಎಸ್. ಗೌಡಪ್ಪ ಗೌಡರ್

ಹಬ್ಬದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಂಚುವುದು, ಅನ್ಯ ಕೋಮಿನ ವಿರುದ್ಧ ಅವಹೇಳನಕಾರಿ ಸಂದೇಶಗಳನ್ನು ಹರಡುವುದು ಹಾಗೂ ಸಮಾಜದಲ್ಲಿ ಶಾಂತಿ ಭಂಗವಾಗುವ ರೀತಿಯಲ್ಲಿ ವರ್ತಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಿಂದು-ಮುಸ್ಲಿಂ ಸಮುದಾಯದವರು ಒಗ್ಗಟ್ಟಿನಿಂದ ಹಬ್ಬವನ್ನು ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮುಂಜಾಗ್ರತಾ ಕ್ರಮವಾಗಿ ಠಾಣೆ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ವಾಹನ ತಪಾಸಣೆ ಮೂಲಕ ಗೋಹತ್ಯೆ, ಗೋಮಾಂಸ ಹಾಗೂ ಅಕ್ರಮ ಗೋಸಾಗಾಣಿಕೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಳ್ಳತನ ಸೇರಿದಂತೆ ಯಾವುದೇ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಠಾಣೆಗೆ ಮಾಹಿತಿ ನೀಡಿದರೆ ಅವರ ಹೆಸರನ್ನು ಗೌಪ್ಯವಾಗಿಟ್ಟು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್ಬ, ಮಕ್ಕಾ ಮಸೀದಿ ಅಧ್ಯಕ್ಷರು, ಕೆಂಚನಾಲ-ಗಾಳಿಬೈಲು ಭಾಗದ ಮಸೀದಿಗಳ ಪದಾಧಿಕಾರಿಗಳು, ಜೆಡಿಎಸ್ ಮುಖಂಡ  ಎನ್.ವರ್ತೇಶ್, ಕರ್ನಾಟಕ ಪ್ರಾಂತೀಯ ಹಿಂದೂ ಮಹಾಸಭಾ ಅಧ್ಯಕ್ಷ ಸುಧೀರ್ ,ರಾಮು ಬಳೆಗಾರ , ಸುದೀಂದ್ರ ಪೂಜಾರಿ,ಮುರುಳಿಧರ ಕೆರೆಹಳ್ಳಿ, ಉಬೇದುಲ್ಲ, ಡಿ.ಈ.ಮಧುಸೂದನ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

img 20260509 wa00046876995610704560379 ರಿಪ್ಪನ್‌ಪೇಟೆಯಲ್ಲಿ ಶಾಂತಿ ಸಮಿತಿ ಸಭೆ; ಅಕ್ರಮ ಗೋಸಾಗಾಣಿಕೆ ತಡೆಯಲು ಕ್ರಮ| ಶಾಂತಿ ಹಾಗೂ ಸೌಹಾರ್ದತೆ ಯಿಂದ  ಬಕ್ರೀದ್ ಆಚರಿಸಿ - ಸರ್ಕಲ್ ಇನ್ಸ್ಪೆಕ್ಟರ್ ಎಂ.ಎಸ್. ಗೌಡಪ್ಪ ಗೌಡರ್

Leave a Reply

Your email address will not be published. Required fields are marked *