ಸಾಗರದಲ್ಲಿ ಕಾರು ಅಪಘಾತ: ಚರಂಡಿಗೆ ಉರುಳಿ ಪಾರಾದ ಪ್ರಯಾಣಿಕರು

Blue and Red Voter Education Banner 20260415 161714 0000 scaled ಸಾಗರದಲ್ಲಿ ಕಾರು ಅಪಘಾತ: ಚರಂಡಿಗೆ ಉರುಳಿ ಪಾರಾದ ಪ್ರಯಾಣಿಕರು
Spread the love

ಸಾಗರ:ಗರದ ಬಿ.ಹೆಚ್ ರಸ್ತೆಯ ಗಣಪತಿ ಕೆರೆ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಘಟನೆ ಮಂಗಳವಾರ ವರದಿಯಾಗಿದೆ.
ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿವಮೊಗ್ಗದಿಂದ ಶಿರಸಿ ಕಡೆಗೆ ಸಂಚರಿಸುತ್ತಿದ್ದ ಕಾರು, ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬವನ್ನು ತಪ್ಪಿಸಲು ಯತ್ನಿಸಿದ ವೇಳೆ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮವಾಗಿ ಕಾರು ರಸ್ತೆ ಪಕ್ಕದ ಚರಂಡಿಗೆ ಉರುಳಿ ಬಿದ್ದಿದೆ.

ಅಪಘಾತದ ತೀವ್ರತೆ ಇದ್ದರೂ, ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ರಕ್ಷಣಾ ಕಾರ್ಯ ನಡೆಸಿದರು.

ಘಟನೆಗೆ ಸಂಬಂಧಿಸಿದಂತೆ ಸಾಗರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

img 20260324 wa00566419605911704620329 ಸಾಗರದಲ್ಲಿ ಕಾರು ಅಪಘಾತ: ಚರಂಡಿಗೆ ಉರುಳಿ ಪಾರಾದ ಪ್ರಯಾಣಿಕರು

Leave a Reply

Your email address will not be published. Required fields are marked *