SIR ಕರ್ತವ್ಯ ವೇಳೆ ಮೃತಪಟ್ಟ ಭುವನ ಪ್ರಕರಣ: ಹೊಸನಗರದಲ್ಲಿ ಮನವಿ ಸಲ್ಲಿಕೆ

Add a heading 20260707 222801 0000 SIR ಕರ್ತವ್ಯ ವೇಳೆ ಮೃತಪಟ್ಟ ಭುವನ ಪ್ರಕರಣ: ಹೊಸನಗರದಲ್ಲಿ ಮನವಿ ಸಲ್ಲಿಕೆ
Spread the love

ಹೊಸನಗರ: ತದಾರರ ಪಟ್ಟಿ ಪರಿಷ್ಕರಣೆ (SIR)ತೆರಳುತ್ತಿದ್ದ ತುಮಕೂರು ಗ್ರಾಮ ಲೆಕ್ಕಾಧಿಕಾರಿ ಭುವನ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದು ಬಳಿಕ ಅದು ಪ್ರತಿಭಟನೆಗೆ ಕಾರಣವಾಗಿತ್ತು.  ತುಮಕೂರಿನಿಂದ ಕುಣಿಗಲ್ ನತ್ತ ತೆರಳುತಿದ್ದ ಲಾರಿ, ಗೂಳೂರು ಬಳಿ ಗ್ರಾಮ ಲೆಕ್ಕಾಧಿಕಾರಿ ಭುವನ ಬೈಕ್ ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸಿದ್ಧಗಂಗಾ ಆಸ್ಪತ್ರೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಭುವನ ಮೃತಪಟ್ಟ ಘಟನೆ ಹಿಂದೆ ಅಧಿಕಾರಿಗಳ ಒತ್ತಡ ಆರೋಪ ಕೇಳಿಬಂದಿತ್ತು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ  ಸಹಯೋಗದೊಂದಿಗೆ 25ಕ್ಕೂ ಹೆಚ್ಚು ಸರ್ಕಾರಿ ನೌಕರರ ಸಂಘಗಳು ದಿನಾಂಕ 4-7-2026 ರಂದು ಅಹೋರಾತ್ರಿ ಪ್ರತಿಭಟನೆಯನ್ನು ನಡೆಸಿತು ಬಳಿಕ ಕಂದಾಯ ಸಚಿವರಾದ  ಪರಮೇಶ್ವರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರತಿಭಟನಾಕಾರದ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು.

ಇದೀಗ ಪ್ರತಿಭಟನಾಕಾರದ ಬೇಡಿಕೆಯಂತೆ ಮೃತ ಭುವನ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಕುಟುಂಬದ ಸದಸ್ಯರಿಗೆ ನೌಕರಿ ಜೊತೆಗೆ ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಹಾಗೆಯೇ ಕಂದಾಯ ಸಚಿವರು ನೀಡಿದ ಇನ್ನುಳಿದ ಹಲವು ಭರವಸೆಗಳನ್ನ ಶೀಘ್ರ ಈಡೇರಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡುವಂತೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಹೊಸನಗರ ತಾಲೂಕು ಘಟಕ ಇಂದು ತಾಲೂಕು ದಂಡಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

img 01221203170246957958046 SIR ಕರ್ತವ್ಯ ವೇಳೆ ಮೃತಪಟ್ಟ ಭುವನ ಪ್ರಕರಣ: ಹೊಸನಗರದಲ್ಲಿ ಮನವಿ ಸಲ್ಲಿಕೆ
ಜಾಹೀರಾತು

Leave a Reply

Your email address will not be published. Required fields are marked *