ಶ್ರಾವಣ ಮಾಸ: ಮೂಲೆಗದ್ದೆ ಮಠದಲ್ಲಿ ರುದ್ರಾಭಿಷೇಕ-ಶಿವಪೂಜೆ|ಧಾರ್ಮಿಕ ಆಚರಣೆಗಳು ಮಾನವೀಯ ಮೌಲ್ಯ ಬೆಳೆಸುತ್ತದೆ : ಮೂಲೆಗದ್ದೆ ಶ್ರೀಗಳು

Addaheading 20260824 220108 0000 ಶ್ರಾವಣ ಮಾಸ: ಮೂಲೆಗದ್ದೆ ಮಠದಲ್ಲಿ ರುದ್ರಾಭಿಷೇಕ-ಶಿವಪೂಜೆ|ಧಾರ್ಮಿಕ ಆಚರಣೆಗಳು ಮಾನವೀಯ ಮೌಲ್ಯ ಬೆಳೆಸುತ್ತದೆ : ಮೂಲೆಗದ್ದೆ ಶ್ರೀಗಳು
Spread the love

ಹೊಸನಗರ: ಶ್ರಾವಣ ಮಾಸದ ಅಂಗವಾಗಿ ರಿಪ್ಪನ್‌ಪೇಟೆಯ ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದಲ್ಲಿ ಮ.ನಿ.ಪ್ರ. ಆಭಿನವ ಚನ್ನಬಸವ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಲೋಕಕಲ್ಯಾಣಾರ್ಥ ರುದ್ರಾಭಿಷೇಕ, ಶಿವಪೂಜಾನುಷ್ಟಾನ ಹಾಗೂ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಭಕ್ತರ ಸಮ್ಮುಖದಲ್ಲಿ ಭಕ್ತಿಭಾವದಿಂದ ನೆರವೇರಿದವು.

ಮೂಲಕರ್ತೃ ಲಿಂ. ಚನ್ನಬಸವ ಮಹಾಸ್ವಾಮಿಗಳು ಹಾಗೂ ಲಿಂ. ಸಿದ್ದಲಿಂಗ ಮಹಾಸ್ವಾಮಿಗಳವರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ತೀರ್ಥಪ್ರಸಾದ ಹಾಗೂ ಸಾಮೂಹಿಕ ದಾಸೋಹ ಆಯೋಜಿಸಲಾಯಿತು.

  ಈ ಸಂದರ್ಭದಲ್ಲಿ ಮಾತನಾಡಿದ ಅಭಿನವ ಚೆನ್ನಬಸವ ಮಹಾಸ್ವಾಮಿಗಳು, ಶ್ರಾವಣ ಮಾಸದಲ್ಲಿ ನಡೆಯುವ ಪೂಜಾ ಕೈಂಕರ್ಯಗಳು ಸಂಸ್ಕಾರ, ಸೌಹಾರ್ದತೆ, ಭಾವೈಕ್ಯತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂದಿನ ಒತ್ತಡದ ಬದುಕಿನಲ್ಲಿ ಯುವಜನತೆ ಧಾರ್ಮಿಕ ಆಚರಣೆಗಳಿಂದ ದೂರವಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದರ್ಶನಾಶೀರ್ವಾದ ಪಡೆಯುವುದರಿಂದ ಶಾಂತಿ ಹಾಗೂ ನೆಮ್ಮದಿ ಲಭಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಬ್ಬಗೋಡು ಕುಟುಂಬಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿ ಗುರುಗಳ ಆಶೀರ್ವಾದ ಪಡೆದರು.

file 000000003f5c8208a0b120fec3430d9d5875889182753419824 ಶ್ರಾವಣ ಮಾಸ: ಮೂಲೆಗದ್ದೆ ಮಠದಲ್ಲಿ ರುದ್ರಾಭಿಷೇಕ-ಶಿವಪೂಜೆ|ಧಾರ್ಮಿಕ ಆಚರಣೆಗಳು ಮಾನವೀಯ ಮೌಲ್ಯ ಬೆಳೆಸುತ್ತದೆ : ಮೂಲೆಗದ್ದೆ ಶ್ರೀಗಳು

Leave a Reply

Your email address will not be published. Required fields are marked *