ತೀರ್ಥಹಳ್ಳಿ: ಮಳೆಗಾಲಕ್ಕೂ ಮುನ್ನ ಕಾಲುಸಂಕ ನಿರ್ಮಾಣಕ್ಕೆ ಒತ್ತು – ಸಚಿವರಿಗೆ ಶಾಸಕ ಆರಗ ಜ್ಞಾನೇಂದ್ರ ಮನವಿ

Blue and Red Voter Education Banner 20260413 173154 0000 scaled ತೀರ್ಥಹಳ್ಳಿ: ಮಳೆಗಾಲಕ್ಕೂ ಮುನ್ನ ಕಾಲುಸಂಕ ನಿರ್ಮಾಣಕ್ಕೆ ಒತ್ತು - ಸಚಿವರಿಗೆ ಶಾಸಕ ಆರಗ ಜ್ಞಾನೇಂದ್ರ ಮನವಿ
Spread the love

ತೀರ್ಥಹಳ್ಳಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತೀರ್ಥಹಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಹತ್ವದ ಚರ್ಚೆಗಳು ನಡೆದವು.

ಎನ್.ಆರ್.ಪುರದಲ್ಲಿ ನಡೆದ ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಾಗೂ ಹುಲಿಕಲ್ ಘಾಟಿ ಪ್ರದೇಶದ ಪರಿಸ್ಥಿತಿಯನ್ನು ಅವಲೋಕಿಸಲು ಸಚಿವರು ಆಗಮಿಸಿದ್ದರು. ಈ ವೇಳೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಸಚಿವರನ್ನು ಭೇಟಿ ಮಾಡಿ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು.
ವಿಶೇಷವಾಗಿ, ಮಳೆಗಾಲ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರ ಸುಗಮಗೊಳಿಸಲು ನೂರಕ್ಕೂ ಹೆಚ್ಚು ಕಾಲುಸಂಕ (ಪಾದಚಾರಿ ಸೇತುವೆ) ನಿರ್ಮಾಣಕ್ಕೆ ತುರ್ತು ಅನುದಾನ ಒದಗಿಸುವಂತೆ ಕೋರಿದರು. ಈಗಾಗಲೇ ಕೆಲವು ಭಾಗಗಳಲ್ಲಿ ಕಾಲುಸಂಕಗಳ ಕೊರತೆ ಮತ್ತು ಹಾನಿಯಿಂದ ಜನರು ಸಂಕಷ್ಟ ಅನುಭವಿಸುತ್ತಿರುವುದನ್ನು ಗಮನಕ್ಕೆ ತಂದರು.

ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಶಾಸಕ ಆರಗ ಜ್ಞಾನೇಂದ್ರ ಅವರು ಸಚಿವರಿಗೆ ಕೋರಿಕೆ ಪತ್ರ ಸಲ್ಲಿಸಿದರು.

img 20260324 wa00155994267571881014875 ತೀರ್ಥಹಳ್ಳಿ: ಮಳೆಗಾಲಕ್ಕೂ ಮುನ್ನ ಕಾಲುಸಂಕ ನಿರ್ಮಾಣಕ್ಕೆ ಒತ್ತು - ಸಚಿವರಿಗೆ ಶಾಸಕ ಆರಗ ಜ್ಞಾನೇಂದ್ರ ಮನವಿ

Leave a Reply

Your email address will not be published. Required fields are marked *