ಐಪಿಎಲ್ ಟಿಕೆಟ್ ನಿರಾಕರಣೆ: ಶಿವಮೊಗ್ಗ ಶಾಸಕ ಎಸ್‌.ಎನ್ ಚನ್ನಬಸಪ್ಪ ಪತ್ರ

Blue and Red Voter Education Banner 20260408 221840 0000 scaled ಐಪಿಎಲ್ ಟಿಕೆಟ್ ನಿರಾಕರಣೆ: ಶಿವಮೊಗ್ಗ ಶಾಸಕ ಎಸ್‌.ಎನ್ ಚನ್ನಬಸಪ್ಪ ಪತ್ರ
Spread the love

ಶಿವಮೊಗ್ಗ:ಳೆದ ವರ್ಷ ಐಪಿಎಲ್ ಪಂದ್ಯದ ವೇಳೆ ಸಂಭವಿಸಿದ ದುರಂತದಲ್ಲಿ 11 ಜನ ಅಮಾಯಕರು ಮೃತಪಟ್ಟ ಘಟನೆಗೆ ಸಂಬಂಧಿಸಿದ ನೋವು ಇನ್ನೂ ಮನಸ್ಸಿನಲ್ಲಿ ತಾಜಾಗಿಯೇ ಇರುವ ಹಿನ್ನೆಲೆಯಲ್ಲಿ, ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್‌.ಎನ್ ಚನ್ನಬಸಪ್ಪ (ಚೆನ್ನಿ) ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಈ ಕುರಿತು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ಸರ್ಕಾರ ಅಥವಾ ಕೆ.ಎಸ್.ಸಿ.ಎ ವತಿಯಿಂದ ಶಾಸಕರಿಗೆ ನೀಡಲಾಗುವ ಐಪಿಎಲ್ ಪಂದ್ಯಗಳ ಪಾಸ್ ಹಾಗೂ ಟಿಕೆಟ್‌ಗಳನ್ನು ಸವಿನಯವಾಗಿ ನಿರಾಕರಿಸುತ್ತಿರುವುದಾಗಿ ತಿಳಿಸಿದ್ದಾರೆ.

“ಐಪಿಎಲ್ ಟಿಕೆಟ್‌ಗಾಗಿ ಸದನದಲ್ಲಿ ಪಟ್ಟು ಹಿಡಿಯುವುದು ಜನರ ದೃಷ್ಟಿಯಲ್ಲಿ ನಮ್ಮನ್ನು ಇನ್ನಷ್ಟು ಕನಿಷ್ಠರನ್ನಾಗಿಸುತ್ತದೆ. ಕಳೆದ ವರ್ಷದ ದುರಂತದ ಆಕ್ರಂದನ ಇಂದಿಗೂ ಕಿವಿಯಲ್ಲಿ ಮಾರ್ದನಿಸುತ್ತಿದೆ. ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಾನು ಯಾವುದೇ ಪಾಸ್ ಅಥವಾ ಟಿಕೆಟ್ ಸ್ವೀಕರಿಸುವುದಿಲ್ಲ” ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹೀಗಾಗಿ, ಮುಂಬರುವ ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದಂತೆ ತಮ್ಮ ಹೆಸರಿನಲ್ಲಿ ಯಾವುದೇ ಟಿಕೆಟ್ ಅಥವಾ ಪಾಸ್ ವಿತರಿಸಬಾರದೆಂದು ಸಭಾಧ್ಯಕ್ಷರನ್ನು ಅವರು ಮನವಿ ಮಾಡಿದ್ದಾರೆ.

ಶಾಸಕರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗಳು  ವ್ಯಕ್ತವಾಗಿದೆ.

1184041780524351483457313 ಐಪಿಎಲ್ ಟಿಕೆಟ್ ನಿರಾಕರಣೆ: ಶಿವಮೊಗ್ಗ ಶಾಸಕ ಎಸ್‌.ಎನ್ ಚನ್ನಬಸಪ್ಪ ಪತ್ರ

Leave a Reply

Your email address will not be published. Required fields are marked *