ಸಿಗಂದೂರು ಸೇತುವೆ ಬಳಿ ಈಜಲು ತೆರಳಿ ಓರ್ವ ನೀರು ಪಾಲು..!!

Screenshot 20260528 192640 Canva ಸಿಗಂದೂರು ಸೇತುವೆ ಬಳಿ ಈಜಲು ತೆರಳಿ ಓರ್ವ ನೀರು ಪಾಲು..!!
Spread the love
img 20260110 wa0000322486040388267212 ಸಿಗಂದೂರು ಸೇತುವೆ ಬಳಿ ಈಜಲು ತೆರಳಿ ಓರ್ವ ನೀರು ಪಾಲು..!!
img 20260427 wa00133793724845998958637 ಸಿಗಂದೂರು ಸೇತುವೆ ಬಳಿ ಈಜಲು ತೆರಳಿ ಓರ್ವ ನೀರು ಪಾಲು..!!

ಸಾಗರ: ಸಾಗರ ತಾಲೂಕಿನ ಸಮೀಪದ ಸಿಗಂದೂರು ಸೇತುವೆಯ ಹೊಳೆಬಾಗಿಲು ಭಾಗದಲ್ಲಿ ಬುಧವಾರ ಮಧ್ಯಾಹ್ನ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಓರ್ವ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಆಂಧ್ರಪ್ರದೇಶ ರಾಜ್ಯದ ಆನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿನ ಗಲಗಲಿ ಗ್ರಾಮದ ಉಮೇಶ್ (35) ಎಂದು ಗುರುತಿಸಲಾಗಿದೆ.

ಉಮೇಶ್ ಅವರು ಕುಟುಂಬಸ್ಥರೊಂದಿಗೆ ಸಿಗಂದೂರು ಚೌಡೇಶ್ವರಿ ದೇವಿ ದರ್ಶನಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ದೇವಿ ದರ್ಶನ ಮುಗಿಸಿ ಬಳಿಕ ಸಿಗಂದೂರು ಸೇತುವೆ ವೀಕ್ಷಣೆಗೆ ತೆರಳಿದ್ದ ವೇಳೆ ಸೇತುವೆಯ ಕೆಳಭಾಗದಲ್ಲಿ ಈಜಲು ಹೋಗಿದ್ದರು. ಈ ಸಂದರ್ಭ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕಾರ್ಗಲ್ ಪೊಲೀಸ್ ಠಾಣೆ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ನಡೆಸಿದರು. ಬಳಿಕ ಮೃತದೇಹವನ್ನು ಪತ್ತೆಹಚ್ಚಿ ಹೊರತೆಗೆದರು.

ಈ ಸಂಬಂಧ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.

img 20260515 wa00066658816990863361763 ಸಿಗಂದೂರು ಸೇತುವೆ ಬಳಿ ಈಜಲು ತೆರಳಿ ಓರ್ವ ನೀರು ಪಾಲು..!!
img 20260528 wa00288874779292326089018 ಸಿಗಂದೂರು ಸೇತುವೆ ಬಳಿ ಈಜಲು ತೆರಳಿ ಓರ್ವ ನೀರು ಪಾಲು..!!

Leave a Reply

Your email address will not be published. Required fields are marked *