ಹೊಸನಗರ : ‘ಶಂಕರ ನಮನ’ ಕಾರ್ಯಕ್ರಮ: ಆದಿ ಶಂಕರಾಚಾರ್ಯರ ತತ್ತ್ವಗಳ ಸ್ಮರಣೆ

Blue and Red Voter Education Banner 20260425 211355 0000 scaled ಹೊಸನಗರ : ‘ಶಂಕರ ನಮನ’ ಕಾರ್ಯಕ್ರಮ: ಆದಿ ಶಂಕರಾಚಾರ್ಯರ ತತ್ತ್ವಗಳ ಸ್ಮರಣೆ
Spread the love

ಹೊಸನಗರ : ಗ್ರಾಮಭಾರತಿ ಟ್ರಸ್ಟ್ ಹಾಗೂ ರಾಷ್ಟ್ರೋತ್ಥಾನ ಬಳಗ, ಕಾರಣಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ಶಂಕರ ಜಯಂತಿ ಪ್ರಯುಕ್ತ ‘ಶಂಕರ ನಮನ’ ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಯುವಪ್ರತಿಭೆ ಹಾಗೂ ಬರಹಗಾರ ವಸಿಷ್ಠ ಅವರು, ಆದಿ ಶಂಕರಾಚಾರ್ಯರು ಅತಿ ಚಿಕ್ಕ ವಯಸ್ಸಿನಲ್ಲೇ ಸನ್ಯಾಸ ಸ್ವೀಕರಿಸಿ ಧರ್ಮದ ಸೂಕ್ಷ್ಮ ತತ್ತ್ವಗಳನ್ನು ಅರಿತು ಅನೇಕ ಸ್ತೋತ್ರ ಸಾಹಿತ್ಯಗಳನ್ನು ರಚಿಸಿರುವುದು ವಿಶಿಷ್ಟ ಸಾಧನೆ ಎಂದರು. ಅವರು ದೇಶದ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿ ಸನಾತನ ಧರ್ಮದ ಸಂರಕ್ಷಣೆ ಹಾಗೂ ಏಕತೆಯನ್ನು ಬಲಪಡಿಸಿದರು ಎಂದು ಹೇಳಿದರು.

img 20260425 wa00395818261412217028072 ಹೊಸನಗರ : ‘ಶಂಕರ ನಮನ’ ಕಾರ್ಯಕ್ರಮ: ಆದಿ ಶಂಕರಾಚಾರ್ಯರ ತತ್ತ್ವಗಳ ಸ್ಮರಣೆ

ದೇಶದ ವಿವಿಧ ಭಾಗಗಳಾದ ದ್ವಾರಕಾ, ಪುರಿ, ಬದರಿನಾಥ ಹಾಗೂ ಶೃಂಗೇರಿಗಳಲ್ಲಿ ಮಠಗಳನ್ನು ಸ್ಥಾಪಿಸಿದ ಶಂಕರಾಚಾರ್ಯರು, ಅದ್ವೈತ ಸಿದ್ಧಾಂತವನ್ನು ನಾಡಿನೆಲ್ಲೆಡೆ ಪಸರಿಸಿ ಕೇವಲ 32 ವರ್ಷಗಳ ಜೀವನದಲ್ಲಿ ಸನಾತನ ಧರ್ಮದ ಪುನರುತ್ಥಾನಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಅವರು ಮಾತನಾಡಿ, ಶಂಕರಾಚಾರ್ಯರು ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸುವ ಮೂಲಕ ದೇಶದ ಏಕತೆಯ ಸಂದೇಶವನ್ನು ಸಾರಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀಧರ್ ಉಡುಪ, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ, ಗಾಯತ್ರಿ ಅರುಣ್, ಸರಸ್ವತಿ, ಆರತಿ ಮಹೇಶ್, ಹನಿಯ ಗುರುಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿನಾಯಕ ಪ್ರಭು ಸ್ವಾಗತಿಸಿ, ಮಾಧುರಿ ವಂದಿಸಿದರು.

img 20260425 wa00407598496593108093122 ಹೊಸನಗರ : ‘ಶಂಕರ ನಮನ’ ಕಾರ್ಯಕ್ರಮ: ಆದಿ ಶಂಕರಾಚಾರ್ಯರ ತತ್ತ್ವಗಳ ಸ್ಮರಣೆ

ಇದೇ ಸಂದರ್ಭದಲ್ಲಿ ಸಿದ್ಧಿವಿನಾಯಕ ಭಜನಾ ಮಂಡಳಿಯವರು ಶಂಕರಾಚಾರ್ಯರು ರಚಿಸಿದ ಸ್ತೋತ್ರಗಳನ್ನು ಪಠಿಸಿ ಭಕ್ತಿಮಯ ವಾತಾವರಣ ನಿರ್ಮಿಸಿದರು.

img 20260324 wa00562664487071917793504 ಹೊಸನಗರ : ‘ಶಂಕರ ನಮನ’ ಕಾರ್ಯಕ್ರಮ: ಆದಿ ಶಂಕರಾಚಾರ್ಯರ ತತ್ತ್ವಗಳ ಸ್ಮರಣೆ

Leave a Reply

Your email address will not be published. Required fields are marked *