ಹೊಸನಗರ ದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ  ‘ಗುರುಶಕ್ತಿ ಬಸ್’ ;ಶಿರಾ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ

Screenshot 20260520 215459 Canva ಹೊಸನಗರ ದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ  'ಗುರುಶಕ್ತಿ ಬಸ್' ;ಶಿರಾ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ
Spread the love
img 20260110 wa00003176888386841754959 ಹೊಸನಗರ ದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ  'ಗುರುಶಕ್ತಿ ಬಸ್' ;ಶಿರಾ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ

ಹೊಸನಗರ : ಹೊಸನಗರ ದಿಂದ ಬೆಂಗಳೂರಿಗೆ  ಸಂಚರಿಸುತ್ತಿದ್ದ ಗುರುಶಕ್ತಿ ಸ್ಲೀಪರ್ ಬಸ್ ಬುಧವಾರ ಬೆಳಗಿನ ಜಾವ 4 ಗಂಟೆಯ ವೇಳೆಗೆ  ತುಮಕೂರು  ಜಿಲ್ಲೆಯ ಶಿರಾ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕಿಡಾಗಿದೆ.

ಹೆದ್ದಾರಿಯ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಈರುಳ್ಳಿ ಹೊತ್ತ ಲಾರಿಯ ಹಿಂಬಂದಿಗೆ ಗುರುಶಕ್ತಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಉಂಟಾಗಿದೆ ಎಂದು ಎನ್ನಲಾಗಿದೆ.

img 20260427 wa00136211309208865355940 ಹೊಸನಗರ ದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ  'ಗುರುಶಕ್ತಿ ಬಸ್' ;ಶಿರಾ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ

ಅಪಘಾತ ನಡೆದ ವೇಳೆಯಲ್ಲಿ ಗುರುಶಕ್ತಿ ಬಸ್ ನಲ್ಲಿ 30 ಮಂದಿ ಪ್ರಯಾಣಿಕರು ಇದ್ದರು ಎಂದು ಮಾಹಿತಿ ತಿಳಿದುಬಂದಿದೆ. ಡಿಕ್ಕಿ ಹೊಡೆದ ತೀವ್ರತೆಗೆ ಬಸ್ ನ ಮುಂಭಾಗ ಒಂದು ಬದಿ ಸಂಪೂರ್ಣ ಜಖಂ ಆಗಿದ್ದು, ಘಟನೆ ನಡೆದ ತಕ್ಷಣವೇ ಸ್ಥಳೀಯರು ಹಾಗೂ ಪೋಲಿಸರು ಸ್ಥಳಕ್ಕೆ ಬಂದು ಗಾಯಾಳುಗಳಿಗೆ ನೆರವು ನೀಡಿದ್ದಾರೆ.

ಘಟನೆಯಲ್ಲಿ ಬಸ್ ಚಾಲಕನ  ಕಾಲಿಗೆ ಗಾಯವಾಗಿದ್ದು,ಇತರ ಕೆಲವು ಪ್ರಯಾಣಿಕರಿಗೆ ಚಿಕ್ಕ-ಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಸಮೀಪದ
ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ‌.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳು ಆಗಿಲ್ಲವೆಂದು ಮೂಲಗಳು ತಿಳಿಸಿವೆ.

img 20260515 wa00064818661734883006696 ಹೊಸನಗರ ದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ  'ಗುರುಶಕ್ತಿ ಬಸ್' ;ಶಿರಾ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ

ಅಪಘಾತದ ನಂತರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಡೆತಡೆ ಉಂಟಾಗಿದ್ದ  ಪರಿಣಾಮ ಸಂಬಂಧಿಸಿದ ಪೋಲಿಸರು ಅದನ್ನು ನಿಯಂತ್ರಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧಿತ ಶಿರಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆಯ ಕುರಿತು ತನಿಖೆ ಮುಂದುವರೆದಿದೆ.

#SHIVAMOGGA #HOSANAGARA #BENGALURU #ACCIDENT

Leave a Reply

Your email address will not be published. Required fields are marked *