ಆನಂದಪುರ : NH-69 ಸಾಗರ – ಶಿವಮೊಗ್ಗ ರಸ್ತೆ ಬ್ಲಾಕ್, ಭಾರಿ ಮಳೆಗೆ ಧರೆಗುರುಳಿದ ಮರ ; ರಿಪ್ಪನ್ ಪೇಟೆ ಕಡೆ ವಾಹನ ತಿರುಗಿಸಲು ಪೊಲೀಸರ ಸೂಚನೆ

Screenshot 20260601 193828 Canva ಆನಂದಪುರ : NH-69 ಸಾಗರ - ಶಿವಮೊಗ್ಗ ರಸ್ತೆ ಬ್ಲಾಕ್, ಭಾರಿ ಮಳೆಗೆ ಧರೆಗುರುಳಿದ ಮರ ; ರಿಪ್ಪನ್ ಪೇಟೆ ಕಡೆ ವಾಹನ ತಿರುಗಿಸಲು ಪೊಲೀಸರ ಸೂಚನೆ
Spread the love
img 20260110 wa0000489010187499149263 ಆನಂದಪುರ : NH-69 ಸಾಗರ - ಶಿವಮೊಗ್ಗ ರಸ್ತೆ ಬ್ಲಾಕ್, ಭಾರಿ ಮಳೆಗೆ ಧರೆಗುರುಳಿದ ಮರ ; ರಿಪ್ಪನ್ ಪೇಟೆ ಕಡೆ ವಾಹನ ತಿರುಗಿಸಲು ಪೊಲೀಸರ ಸೂಚನೆ

ಆನಂದಪುರ: ಎನ್‌ಎಚ್-69ರ ಯಡೆಹಳ್ಳಿ ಪೆಟ್ರೋಲ್ ಬಂಕ್ ಸಮೀಪ ಭಾರೀ ಗಾತ್ರದ ಮರ ರಸ್ತೆ ಮಧ್ಯೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಭಾರೀ ಮಳೆಯ ಹಿನ್ನೆಲೆಯಲ್ಲಿ ಮರ ತೆರವು ಕಾರ್ಯಾಚರಣೆಯಲ್ಲಿ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ.

img 20260601 wa0015127327294384805125 ಆನಂದಪುರ : NH-69 ಸಾಗರ - ಶಿವಮೊಗ್ಗ ರಸ್ತೆ ಬ್ಲಾಕ್, ಭಾರಿ ಮಳೆಗೆ ಧರೆಗುರುಳಿದ ಮರ ; ರಿಪ್ಪನ್ ಪೇಟೆ ಕಡೆ ವಾಹನ ತಿರುಗಿಸಲು ಪೊಲೀಸರ ಸೂಚನೆ

ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಆನಂದಪುರ ಪೊಲೀಸರ ಮನವಿ :

ಹಿನ್ನೆಲೆ ಪ್ರಯಾಣಿಕರು ಹಾಗೂ ವಾಹನ ಸವಾರರು ಸುರಕ್ಷತೆ ದೃಷ್ಟಿಯಿಂದ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಆನಂದಪುರ ಪೊಲೀಸರು ಮನವಿ ಮಾಡಿದ್ದಾರೆ.
ಶಿವಮೊಗ್ಗ ಕಡೆಗೆ ತೆರಳುವ ವಾಹನಗಳು ರಿಪ್ಪನ್‌ಪೇಟೆ–ಆಯನೂರು ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ. ಹಾಗೆಯೇ ಸಾಗರ ಕಡೆಗೆ ತೆರಳುವವರು ಆಯನೂರು–ರಿಪ್ಪನ್‌ಪೇಟೆ–ಆನಂದಪುರ ಮಾರ್ಗವಾಗಿ ಸಂಚರಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಸಾರ್ವಜನಿಕರು ಅನಗತ್ಯವಾಗಿ ಯಡೆಹಳ್ಳಿ ಮಾರ್ಗದಲ್ಲಿ ಸಂಚರಿಸಲು ಮುಂದಾಗದೇ, ಪೊಲೀಸ್ ಇಲಾಖೆಯ ಸೂಚನೆಗಳನ್ನು ಪಾಲಿಸಿ ಸಹಕರಿಸುವಂತೆ ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಮನವಿ ಮಾಡಿದ್ದಾರೆ.

img 20260515 wa00062825245092365245288 ಆನಂದಪುರ : NH-69 ಸಾಗರ - ಶಿವಮೊಗ್ಗ ರಸ್ತೆ ಬ್ಲಾಕ್, ಭಾರಿ ಮಳೆಗೆ ಧರೆಗುರುಳಿದ ಮರ ; ರಿಪ್ಪನ್ ಪೇಟೆ ಕಡೆ ವಾಹನ ತಿರುಗಿಸಲು ಪೊಲೀಸರ ಸೂಚನೆ

Leave a Reply

Your email address will not be published. Required fields are marked *