ಸಾಗರ: ಕೆಫೆ ಮಾಲೀಕನಿಂದಲೇ ಕೆಲಸಗಾರನ ಹತ್ಯೆ! – ಮಾಲೀಕ ಇಮ್ರಾನ್  ಬಂಧನ

FB IMG 1775223497410 ಸಾಗರ: ಕೆಫೆ ಮಾಲೀಕನಿಂದಲೇ ಕೆಲಸಗಾರನ ಹತ್ಯೆ! - ಮಾಲೀಕ ಇಮ್ರಾನ್  ಬಂಧನ
Spread the love

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್. ಬಿ ಪ್ರತಿಕ್ರಿಯೆ

ಸಾಗರ : ನಗರದಲ್ಲಿನ ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ 26ವರ್ಷದ ಟಿಂಕೂ ಶರ್ಮ ಎಂಬುವನ ಕೊಲೆ ಪ್ರಕರಣದ ಆರೋಪಿಯನ್ನು ನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಟಫ್ ಕೆಫೆ ಮತ್ತು ಗೇಮ್ ಜೋನ್‌ನಲ್ಲಿ ಬಿಹಾರ ಮೂಲದ ಟಿಂಕೂ ಶರ್ಮ ಎಂಬುವನ ಅಡುಗೆ ಕೆಲಸಕ್ಕೆ ಆರು ತಿಂಗಳ ಹಿಂದೆ ಸೇರಿಕೊಂಡಿದ್ದ. ಬುಧವಾರ ತಡರಾತ್ರಿ ಕೆಫೆ ಮಾಲೀಕ ಇಮ್ರಾನ್ ಎಂಬಾತನು ತನ್ನ ಕೆಫೆಯಲ್ಲಿ ಟಿಂಕೂ ಶರ್ಮ ಹಣ ಕಳ್ಳತನ ಮಾಡುತ್ತಿದ್ದಾನೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾನೆ.

ಈ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಟಿಂಕೂ ಶರ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಶವವನ್ನು ಇರ್ಫಾನ್ ತನ್ನ ಕಾರಿನಲ್ಲಿ ಸಾಗಿಸುವಾಗ ನೆಹರು ನಗರದಲ್ಲಿ ಪೊಲೀಸರು ಕಾರಿನಲ್ಲಿ ಶವ ಇರುವುದನ್ನು ಪತ್ತೆಹಚ್ಚಿ, ಆರೋಪಿ ಇಮ್ರಾನ್‌ನನ್ನು ವಶಕ್ಕೆ ಪಡೆದಿದ್ದಾರೆ.



ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ನಿಖಿಲ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಮಾಲೀಕ ಮತ್ತು ಕಾರ್ಮಿಕನ ನಡುವೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ವಿಚಾರಣೆ ನಂತರ ಇನ್ನಷ್ಟು ಮಾಹಿತಿ ತಿಳಿಯಲಿದೆ ಎಂದು ತಿಳಿಸಿದ್ದಾರೆ.

img 20260110 wa00001123454587291230183 ಸಾಗರ: ಕೆಫೆ ಮಾಲೀಕನಿಂದಲೇ ಕೆಲಸಗಾರನ ಹತ್ಯೆ! - ಮಾಲೀಕ ಇಮ್ರಾನ್  ಬಂಧನ
img 20260324 wa00574636717183425086179 ಸಾಗರ: ಕೆಫೆ ಮಾಲೀಕನಿಂದಲೇ ಕೆಲಸಗಾರನ ಹತ್ಯೆ! - ಮಾಲೀಕ ಇಮ್ರಾನ್  ಬಂಧನ

Leave a Reply

Your email address will not be published. Required fields are marked *