ರಿಪ್ಪನ್ಪೇಟೆ: ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯ ಮಟ್ಟದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ದಾಖಲಿಸಿದೆ. ಕಾಲೇಜಿನ ಬಿ.ಕಾಂ ವಿಭಾಗದ ಎರಡು ವಿದ್ಯಾರ್ಥಿ ತಂಡಗಳು ಪ್ರತಿಷ್ಠಿತ ಎಫ್ಕೆಸಿಸಿಐ ಇನೋ ಮಂಥನ್-2026 (18ನೇ ಆವೃತ್ತಿ) ಬಿಸಿನೆಸ್ ಪ್ಲಾನ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಹೆಮ್ಮೆ ತಂದಿವೆ.
ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ Federation of Karnataka Chambers of Commerce and Industry (FKCCI) ಈ ಸ್ಪರ್ಧೆಯನ್ನು ಆಯೋಜಿಸಿದ್ದು, ರಾಜ್ಯದ ಯುವ ಉದ್ಯಮಿಗಳಿಗೆ ತಮ್ಮ ನವೀನ ಉದ್ಯಮ ಕಲ್ಪನೆಗಳನ್ನು ಪ್ರದರ್ಶಿಸುವ ವೇದಿಕೆಯನ್ನು ಒದಗಿಸಿದೆ.
ಗ್ರ್ಯಾಂಡ್ ಫಿನಾಲೆ ಸೆಪ್ಟೆಂಬರ್ 4, 2026ರಂದು ಬೆಳಿಗ್ಗೆ 10:30ಕ್ಕೆ ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿದ್ದು, ರಿಪ್ಪನ್ಪೇಟೆ ಸರ್ಕಾರಿ ಕಾಲೇಜಿನ ಎರಡು ತಂಡಗಳು ಕಾಲೇಜನ್ನು ಪ್ರತಿನಿಧಿಸಲಿವೆ.

ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾದ ತಂಡಗಳು
ತಂಡ–1 (Project Code: BP-1056):
* ಧನ್ಯ ಬಿ.ಜಿ.
* ಮಾನ್ಯ ಬಿ.ಆರ್.
* ಮಾನ್ಯಶ್ರೀ ಎಂ.
* ರಕ್ಷಿತಾ ಕೆ.ವೈ.
ತಂಡ–2 (Project Code: BP-1207):
* ನಮ್ರತಾ ಎಸ್.ಕೆ.
* ಹೇಮಾ ಜೆ.ಎ.
* ದೇವಕಿ ಕೆ.ಪಿ.
* ರಶ್ಮಿ ವಿ.
ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಕೇಶ್ ಸಿ. ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರೂಪಿಸಿದ ನವೀನ ಉದ್ಯಮ ಯೋಜನೆಗಳು ರಾಜ್ಯ ಮಟ್ಟದ ತೀರ್ಪುಗಾರರ ಮೆಚ್ಚುಗೆ ಪಡೆದು ಅಂತಿಮ ಸುತ್ತಿಗೆ ಪ್ರವೇಶಿಸಿವೆ.
ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಕಾಲೇಜು ಅಭಿವೃದ್ಧಿ ಮಂಡಳಿ (CDC) ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ವಿಧಾನ ಸೌಧದಲ್ಲಿ ನಡೆಯಲಿರುವ ಮಹಾ ಅಂತಿಮ ಸುತ್ತಿನಲ್ಲಿ ವಿದ್ಯಾರ್ಥಿಗಳು ಮತ್ತಷ್ಟು ಯಶಸ್ಸು ಸಾಧಿಸಿ ಕಾಲೇಜಿಗೆ ಕೀರ್ತಿ ತರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

















Leave a Reply