ಗಣಿತಶಾಸ್ತ್ರದಲ್ಲಿ ಅರಸಾಳು ಗ್ರಾಮದ ಪೂಜಾ ಎಂ.ಎನ್‌ಗೆ ಪಿಎಚ್.ಡಿ ಗೌರವ

NAADI NEWS 20260102 160257 0000 1 ಗಣಿತಶಾಸ್ತ್ರದಲ್ಲಿ ಅರಸಾಳು ಗ್ರಾಮದ ಪೂಜಾ ಎಂ.ಎನ್‌ಗೆ ಪಿಎಚ್.ಡಿ ಗೌರವ
Spread the love


ರಿಪ್ಪನ್ ಪೇಟೆ:ಶೈಕ್ಷಣಿಕ ಲೋಕದಲ್ಲಿ ಅರಸಾಳು ಗ್ರಾಮದ ಹೆಮ್ಮೆಯ ಹೆಸರಾಗಿ ಹೊರಹೊಮ್ಮಿರುವ ಪೂಜಾ ಎಂ.ಎನ್ ಅವರು ಗಣಿತಶಾಸ್ತ್ರದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದುಕೊಂಡು ಗ್ರಾಮಕ್ಕೆ ಹಾಗೂ ಜಿಲ್ಲೆಯಿಗೆ ಕೀರ್ತಿ ತಂದಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ “Theoretical Investigation of Boundary Layer Flow and Heat Transfer over Certain Geometries” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ಪ್ರದಾನ ಮಾಡಿದೆ. ಬೌಂಡರಿ ಲೇಯರ್ ಫ್ಲೋ ಮತ್ತು ಹೀಟ್ ಟ್ರಾನ್ಸ್ಫರ್ ಕುರಿತು ನಡೆಸಿದ ಈ ಸೈದ್ಧಾಂತಿಕ ಅಧ್ಯಯನವು ಗಣಿತಶಾಸ್ತ್ರದ ಸಂಶೋಧನಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದು ಅಕಾಡೆಮಿಕ್ ವಲಯದಲ್ಲಿ ಮೆಚ್ಚುಗೆ ಪಡೆದಿದೆ.
ಈ ಸಂಶೋಧನೆಯನ್ನು ಕುವೆಂಪು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎಸ್.ಕೆ. ನರಸಿಂಹಮೂರ್ತಿ ಅವರ ಮಾರ್ಗದರ್ಶನದಲ್ಲಿ ಪೂಜಾ ಎಂ.ಎನ್ ಅವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಸಂಕೀರ್ಣ ಗಣಿತೀಯ ಸಿದ್ಧಾಂತಗಳನ್ನು ವೈಜ್ಞಾನಿಕ ದೃಷ್ಟಿಕೋನದೊಂದಿಗೆ ವಿಶ್ಲೇಷಿಸುವಲ್ಲಿ ಅವರ ಅಧ್ಯಯನವು ಗಮನಾರ್ಹವಾಗಿದೆ.
    ಪೂಜಾ ಎಂ.ಎನ್ ಅವರು ಅರಸಾಳು ನಿವಾಸಿ ಲಕ್ಷ್ಮಣ್ ರಾವ್ ಸಾಕ್ರೆ (ರಾಜು ಟೈಲರ್) ಹಾಗೂ ವಿಜಯಲಕ್ಷ್ಮಿ ಅವರ ಸೊಸೆ ಹಾಗೂ ರೋಹನ್ ಸಾಕ್ರೆ ಅವರ ಪತ್ನಿಯಾಗಿದ್ದಾರೆ. ಜೊತೆಗೆ ಶಿವಮೊಗ್ಗ ನಿವಾಸಿ ನಾಗರಾಜ್ ಮತ್ತು ಶಾರದ ಅವರ ಪುತ್ರಿಯಾಗಿ ಕುಟುಂಬದ ಶೈಕ್ಷಣಿಕ ಪರಂಪರೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ.
ಅವರ ಈ ಶೈಕ್ಷಣಿಕ ಸಾಧನೆಗೆ ಕುಟುಂಬದವರು, ಬಂಧುಮಿತ್ರರು, ವಿದ್ಯಾಭಿಮಾನಿಗಳು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಅವರು ಸಂಶೋಧನೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.


Spread the love

Leave a Reply

Your email address will not be published. Required fields are marked *