ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಾರ್ವಜನಿಕರು

NAADI NEWS 20260126 220238 0000 ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಾರ್ವಜನಿಕರು
Spread the love

ರಿಪ್ಪನ್ ಪೇಟೆ : ಭಾರತದ ಕಿರೀಟ ಜಮ್ಮು ಮತ್ತು ಕಾಶ್ಮೀರದ ರಕ್ಷಣೆಗೆ ಭಾರತೀಯ ವೀರ ಯೋಧರು ಜೀವವನ್ನೇ ಪಣವಾಗಿಟ್ಟು ಪ್ರತಿಕ್ಷಣ ಹೋರಾಡುತ್ತಿದ್ದಾರೆ. ಒಂದು ಕಡೆ ಉಗ್ರರ ದಾಳಿ ವೇಳೆ ಹೋರಾಡಿ, ಭಾರತೀಯ ಯೋಧರು ಹುತಾತ್ಮರಾಗುತ್ತಿರುವ ಕಾಲಘಟ್ಟದಲ್ಲಿ ಈ ರೀತಿಯ ಭೀಕರ ಅಪಘಾತದಲ್ಲಿ 10 ಸೈನಿಕರು ಹುತಾತ್ಮರಾದ ಘಟನೆ ಇನ್ನಷ್ಟು ಆಘಾತ ಉಂಟು ಮಾಡಿದೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಿಪ್ಪನ್ ಪೇಟೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರಾಜು ರೆಡ್ಡಿ ಭಾವನಾತ್ಮಕವಾಗಿ ಮಾತನಾಡಿದರು.

ಪಟ್ಟಣದ ವಿನಾಯಕ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವಂತಹ ಕಾರ್ಯವನ್ನು ಮಾಡಿದರು ಈ ಸಂದರ್ಭದಲ್ಲಿ ಹುತಾತ್ಮರಿಗೆ ಪುಷ್ಪಾರ್ಚನೆ ಸಲ್ಲಿಸಿ , ಮೌನಚರಣೆಯನ್ನು ಆಚರಿಸುವ ಮೂಲಕ ಗೌರವವನ್ನು ಸಲ್ಲಿಸಿದರು .

ಮೂಗುಡ್ತಿಯ ನಿವೃತ್ತ ಸೈನಿಕರಾದ ರಾಘವೇಂದ್ರ ಆಚಾರ್ಯ ಅವರು ಮಾತನಾಡಿ ಸೈನಿಕರು ದೇಶಕ್ಕಾಗಿ ದುಡಿಯುತ್ತಿದ್ದಾರೆ . ದೇಶಕ್ಕಾಗಿ ಜೀವವನ್ನೇ ಪಣಕ್ಕಿಟ್ಟು ಗಡಿಯಲ್ಲಿರುವ ಸೈನಿಕರಿಗೆ ಹೀಗೆ ಗೌರವವನ್ನು ನೀಡೋಣ.ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಮ್ಮ  ದುಃಖವನ್ನು ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ಪ್ರಮುಖರಾದ ಆರ್ ಟಿ ಗೋಪಾಲ, ಹಿಂದೂ ಜಾಗರಣ ವೇದಿಕೆಯ ದೇವರಾಜ ಕುಷನ್, ಮಂಜುನಾಥ್ ಆಚಾರ್, ರಾಘವೇಂದ್ರ ಬಿ ಎನ್, ಉದಯ್, ಆಟೋ ರಾಘವೇಂದ್ರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಸುಧೀಂದ್ರ ಪೂಜಾರಿ, ಜಿ ಡಿ ಮಲ್ಲಿಕಾರ್ಜುನ್,ಪಿ.ರಮೇಶ್, ಕಗ್ಗಲಿ ಲಿಂಗಪ್ಪ, ಮೆಣಸೆ ಆನಂದ,ಆರ್. ರಾಘವೇಂದ್ರ, ರಂಜನ್ ಆರ್, ಶ್ರೀನಿವಾಸ್ ಆಚಾರ್, ಸಂತೋಷ್, ಫ್ಯಾನ್ಸಿ ರಮೇಶ್, ಬೆಳಂದೂರು ಹರೀಶ್, ಗಣೇಶ್ ಸ್ಟೀಲ್ ಪವನ್,ಮಹಿಳಾ ಮುಖಂಡರಾದ ಪದ್ಮ ಸುರೇಶ್, ನಾಗರತ್ನ ದೇವರಾಜ್, ಮತ್ತು ಮೂಗುಡ್ತಿ ಜನಾರ್ಧನ, ಮೂಗುಡ್ತಿ ಕಾರ್ತಿಕ್, ಅಭಿಷೇಕ್,ಭರತ್ ಮತ್ತು ಅನೇಕರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *