ಭಾರತವು 1947ರಲ್ಲಿ ಸ್ವಾತಂತ್ರ್ಯ ಪಡೆದರೂ ಗೋವಾ, ದಮಣ್ ಮತ್ತು ದಿಯು ಪ್ರದೇಶಗಳು ಪೋರ್ಚುಗೀಸರ ಆಡಳಿತದಲ್ಲೇ ಉಳಿದಿದ್ದವು. ಪೋರ್ಚುಗೀಸ್ ಸರ್ಕಾರ ಈ ಪ್ರದೇಶಗಳನ್ನು ಭಾರತಕ್ಕೆ ಸೇರಿಸಲು ನಿರಾಕರಿಸಿತು. ಇದರಿಂದ ಗೋವಾವಾಸಿಗಳಲ್ಲಿ ಅಸಮಾಧಾನ ಹೆಚ್ಚಾಯಿತು ಮತ್ತು ವಿಮೋಚನಾ ಹೋರಾಟಕ್ಕೆ ವೇಗ ಸಿಕ್ಕಿತು.
ಗೋವಾ ವಿಮೋಚನೆಗಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಅಹಿಂಸಾತ್ಮಕ ಮತ್ತು ಸಶಸ್ತ್ರ ಹೋರಾಟಗಳಲ್ಲಿ ಭಾಗವಹಿಸಿದರು. ರಾಮಮನೋಹರ್ ಲೋಹಿಯಾ, ತ್ರಿಸ್ತಾಂವ್ ಬ್ರಾಗಾಂಜಾ ಕುನ್ಹಾ ಮೊದಲಾದ ನಾಯಕರು ಈ ಹೋರಾಟಕ್ಕೆ ಮಹತ್ವದ ಕೊಡುಗೆ ನೀಡಿದರು. ಜನರ ಒತ್ತಾಯ ಮತ್ತು ರಾಜತಾಂತ್ರಿಕ ಪ್ರಯತ್ನಗಳಿದ್ದರೂ ಪೋರ್ಚುಗೀಸರ ನಿಲುವಿನಲ್ಲಿ ಬದಲಾವಣೆ ಕಂಡುಬರಲಿಲ್ಲ.
ಅಂತಿಮವಾಗಿ 1961ರ ಡಿಸೆಂಬರ್ 17 ರ ಮಧ್ಯರಾತ್ರಿ ಪ್ರಾರಂಭವಾಯಿತು. 18–19ರಂದು ಭಾರತ ಸರ್ಕಾರ “ಆಪರೇಶನ್ ವಿಜಯ್” ಎಂಬ ಸೈನಿಕ ಕಾರ್ಯಾಚರಣೆಯನ್ನು ನಡೆಸಿತು. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಸಂಯುಕ್ತ ಕಾರ್ಯಾಚರಣೆಯಿಂದ ಗೋವಾ, ದಮಣ್ ಮತ್ತು ದಿಯು ಪ್ರದೇಶಗಳು ಪೋರ್ಚುಗೀಸರ ಆಡಳಿತದಿಂದ ಮುಕ್ತವಾದವು.
ಡಿಸೆಂಬರ್ 19, 1961ರಂದು ಗೋವಾ ಭಾರತಕ್ಕೆ ಅಧಿಕೃತವಾಗಿ ಸೇರಿತು. ಈ ದಿನವನ್ನು ಪ್ರತಿವರ್ಷ ಗೋವಾ ವಿಮೋಚನಾ ದಿನವಾಗಿ ಆಚರಿಸಲಾಗುತ್ತದೆ. ಗೋವಾ ವಿಮೋಚನೆ ಭಾರತದ ಏಕತೆ ಮತ್ತು ಅಖಂಡತೆಯ ಸಂಕೇತವಾಗಿದ್ದು, ಸ್ವಾತಂತ್ರ್ಯದ ಮೌಲ್ಯವನ್ನು ನೆನಪಿಸುವ ಮಹತ್ವದ ಘಟನೆಯಾಗಿದೆ.












Leave a Reply