ಪಟಗುಪ್ಪ ಸೇತುವೆ ಗೋಹಂತಕರ ಸಾಮ್ರಾಜ್ಯ? ಮಲೆನಾಡನ್ನೆ ಬೆಚ್ಚಿಬೀಳಿಸುವ ಶರಾವತಿ ಗೊಹಂತಕರ ಜಾಲ !!!

ಹೊಸನಗರ ಸಮೀಪದ ಪಟಗುಪ್ಪ ಸೇತುವೆ ಹಿನ್ನೀರು ಪ್ರದೇಶದಲ್ಲಿ ಗೋವಿನ ಅವಶೇಷಗಳು, ತಲೆಬುರುಡೆಗಳು ಹಾಗೂ ಅನುಮಾನಾಸ್ಪದ ಚೀಲಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇತ್ತೀಚಿನ ಗೋಹತ್ಯೆ ಯತ್ನ ಪ್ರಕರಣದ ಆರೋಪಿಗಳ ಬಂಧನ ಇನ್ನೂ ಆಗದಿರುವ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗಳ ಕುರಿತು ಸಮಗ್ರ ತನಿಖೆಗೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಆಗ್ರಹಿಸಿವೆ.